ಅಕ್ಟೋಬರ್ 28ರಂದು ಬಿಡುಗಡೆಯಾಗಲಿರುವ ಗಂಧದ ಗುಡಿಯಲ್ಲಿ ಪುನೀತ್ ಮತ್ತು ನಿರ್ದೇಶಕ, ವನ್ಯಜೀವಿ ಛಾಯಾಗ್ರಾಹಕ ಅಮೋಘವರ್ಷ ಜೆಎಸ್ ಕರ್ನಾಟಕದ ಶ್ರೀಮಂತ ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ಪ್ರೇಕ್ಷಕರಿಗೆ ಉಣಬಡಿಸಲು ಸಿದ್ಧರಾಗಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರವಾದ ಗಂಧದ ಗುಡಿ ಬಿಡುಗಡೆಯ ಹತ್ತಿರದಲ್ಲಿದೆ.
ಅಕ್ಟೋಬರ್ 28ರಂದು ಬಿಡುಗಡೆಯಾಗಲಿರುವ ಗಂಧದ ಗುಡಿಯ ಬಗ್ಗೆ ನಿರ್ದೇಶಕ ಅಮೋಘವರ್ಷ ಅವರು ನನ್ನ ನೈಸರ್ಗಿಕ ಇತಿಹಾಸದ ಸಾಕ್ಷ್ಯಚಿತ್ರ ವೈಲ್ಡ್ ಕರ್ನಾಟಕದಿಂದ ನಾವಿಬ್ಬರು ಮಾತನಾಡುವಂತಾಯಿತು. ಪುನೀತ್ ಅವರನ್ನು ಸರಳ ವ್ಯಕ್ತಿ ಎಂದು ಕರೆಯುವ ಅಮೋಘವರ್ಷ, ಅವರು ಗಂಧದ ಗುಡಿ ಅವರಿಗೆ ಸಂಪೂರ್ಣ ಹೊಸ ಅನುಭವವಾಗಿತ್ತು. ನಾವು ಹೆಚ್ಚು ಜನರನ್ನು ನೋಡದಂತಹ ದೂರದ ಸ್ಥಳದಲ್ಲಿದ್ದೆವು. ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಬೆಂಬಲವಿಲ್ಲದೆ ಜೀವನವನ್ನು ನ್ಯಾವಿಗೇಟ್ ಮಾಡುವುದು ಬಹಳ ಹೊಸತು ಎಂದು ಹೇಳಿದರು.
ವನ್ಯಜೀವಿ ಛಾಯಾಗ್ರಾಹಕ ಮತ್ತು ಚಲನಚಿತ್ರ ನಿರ್ಮಾಪಕನಾಗಿ ನಾನು 2 ದಶಕಗಳಿಂದ ಈ ಕೆಲಸವನ್ನು ಮಾಡುತ್ತಿದ್ದೇನೆ ಮತ್ತು ಪುನೀತ್ ಅವರಂತಹ ಪ್ರಸಿದ್ಧ ವ್ಯಕ್ತಿಯೊಂದಿಗೆ ನಾನು ಕೆಲಸ ಮಾಡಿರುವುದು ಇದೇ ಮೊದಲು ಎಂದರು. ಆದಾಗ್ಯೂ, ಅವರು ಸ್ಟಾರ್ ಎಂದು ಎಂದಿಗೂ ನಾನು ಭಾವಿಸಲಿಲ್ಲ. ಏಕೆಂದರೆ, ಅವರು ಕೂಡ ಆ ರೀತಿ ವರ್ತಿಸಲಿಲ್ಲ. ಅವರೊಂದಿಗೆ ಯಾರಾದರೂ ಕೂಡ ತುಂಬಾ ಕಂಫರ್ಟ್ ಆಗಿರಬಹುದು ಎಂದು ಹೇಳುತ್ತಾರೆ.
ನಾವು ಈ ಚಿತ್ರವನ್ನು ವಾಣಿಜ್ಯ ಉದ್ದೇಶಕ್ಕಾಗಿ ಮಾಡಿಲ್ಲ ಮತ್ತು ಪುನೀತ್ ಅವರು ಯಾವುದೇ ರೀತಿಯ ಒತ್ತಡವನ್ನು ಹಾಕಿಲ್ಲ. ನಿಜವಾಗಿ ಹೇಳಬೇಕೆಂದರೆ, 10 ರಿಂದ 11 ಜನ ಈ ಸಿನಿಮಾ ನೋಡಿದರೂ ಸಾಕು ನನಗೆ ಖುಷಿಯಾಗುತ್ತದೆ ಎಂದು ಬೇರೊಬ್ಬರೊಂದಿಗೆ ಹೇಳಿದ್ದು ನನಗೆ ನೆನಪಿದೆ. ಆದರೆ, ಗಂಧದ ಗುಡಿಯ ಬಗೆಗಿನ ಅಬ್ಬರದ ಪ್ರಚಾರ ನೋಡಿದಾಗ ಮನಸ್ಸಿಗೆ ಮುದನೀಡುತ್ತದೆ ಎಂದರು.
ಈ ಸಿನಿಮಾವನ್ನು ಜನರು ನೋಡುತ್ತಾರೆ ಮತ್ತು ಮೆಚ್ಚುತ್ತಾರೆ ಎಂಬ ನಂಬಿಕೆಯನ್ನು ಮಾತ್ರ ಇದು ಹುಟ್ಟುಹಾಕುತ್ತದೆ. ಪ್ರಾಮಾಣಿಕ ಸಿನಿಮಾ ಮತ್ತು ಶುದ್ಧ ಉದ್ದೇಶಕ್ಕೆ ಗೆಲುವಿದೆ ಎನ್ನುತ್ತಾರೆ ಅಮೋಘವರ್ಷ. ಗಂಧದ ಗುಡಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಧ್ವನಿ ನೀಡಿದ್ದಾರೆ ಎಂಬ ಸುದ್ದಿಯೂ ಇದೆ ಎಂದು ಕೇಳಿದ್ದಕ್ಕೆ ಉತ್ತರಿಸಿದ ಅವರು, ಅಶ್ವಿನಿ ಅವರ ಭಾಗವು ಆಶ್ಚರ್ಯಕರವಾಗಿದೆ. ಇದು ಬಿಡುಗಡೆಯ ದಿನಾಂಕದಂದು ಬಹಿರಂಗಗೊಳ್ಳುತ್ತದೆ ಎಂದರು
ಮೊದಲಿನಿಂದಲೂ ಅವರು ಪ್ರಯಾಣದ ಭಾಗವಾಗಿದ್ದಾರೆ. ನಾನು ಅಶ್ವಿನಿ ಮತ್ತು ಅಪ್ಪು ಅವರನ್ನು ಒಟ್ಟಿಗೆ ಭೇಟಿ ಮಾಡಿದ್ದೇನೆ. ಅವರು ಕೂಡ ಚಿತ್ರೀಕರಣಕ್ಕೆ ಬಂದಿದ್ದಾರೆ. ಅವರ ಕಾರಣದಿಂದಾಗಿಯೇ ನಾವು ಯೋಜನೆಗಳ ಪ್ರಕಾರ ಈ ಚಿತ್ರವನ್ನು ಬಿಡುಗಡೆ ಮಾಡಲು ಸಾಧ್ಯವಾಗುತ್ತಿದೆ. ಗಂಧದಗುಡಿ ಚಿತ್ರದಲ್ಲಿ ಅಶ್ವಿನಿ ಕೂಡ ಬಣ್ಣಹಚ್ಚಿದ್ದಾರೆ ಎನ್ನಲಾಗಿದೆ
ಪುನೀತ್ ರಾಜ್ ಕುಮಾರ್ ಗಂಧದ ಗುಡಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಬಯಸಿದ್ದರು. ಸಂಗೀತ ನಿರ್ದೇಶಕ ಲೋಕನಾಥ್ ಪುನೀತ್ ಅವರ ಮೊದಲ ವರ್ಷದ ಪುಣ್ಯತಿಥಿಗೂ ಒಂದು ದಿನ ಮುಂಚಿತವಾಗಿ ಗಂಧದ ಗುಡಿ ಬಿಡುಗಡೆಯಾಗಲಿದೆ. ನಾನು ಪುನೀತ್ ಅವರನ್ನು ಯಾವಾಗಲೂ ನಗುತ್ತಿರುವ ವ್ಯಕ್ತಿ ಎಂದೇ ನಾನು ನೆನಪಿಟ್ಟುಕೊಳ್ಳುತ್ತೇನೆ. ಅವರು ನಮ್ಮ ಸುತ್ತ ಇದ್ದಾಗಲೆಲ್ಲ ನಾವು ಸಂತೋಷವಾಗಿರುತ್ತಿದ್ದೆವು.
ದುಃಖ ಖಂಡಿತಾ ಇರುತ್ತದೆ. ಆದರೆ ನಾವು ದುಃಖಿತರಾಗಬೇಕೆಂದು ಅವರು ಬಯಸುತ್ತಿರಲಿಲ್ಲ. ಗಂಧದ ಗುಡಿಯನ್ನು ವೀಕ್ಷಿಸಲು ಧಾವಂತ ಪಡುವ ಜನರು ಅವರು ಮುಗುಳು ನಗುವುದನ್ನು ಕಂಡು ಸಂತಸ ಪಡುತ್ತಾರೆ. ನನ್ನ ಮಟ್ಟಿಗೆ, ನಾವೆಲ್ಲರೂ ಸಂತೋಷದಿಂದ ಅವರನ್ನು ನೆನಪಿಸಿಕೊಳ್ಳುವುದು ಮತ್ತು ಅವರ ಕೆಲವು ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಈ ಚಿತ್ರದ ಯಶಸ್ಸು ಎನ್ನುತ್ತಾರೆ. ಅಶ್ವಿನಿ ಪುನಿತ್ ರಾಜ್ ಕುಮಾರ್ ಅವರ ಪಿಆರ್ಕೆ ಪ್ರೊಡಕ್ಷನ್ ಅಡಿಯಲ್ಲಿ ಗಂಧದ ಗುಡಿಗೆ ಅಜನೀಶ್ ಲೋಕನಾಥ್ ಸಂಗೀತ ಮತ್ತು ಪ್ರತೀಕ್ ಶೆಟ್ಟಿ ಅವರ ಛಾಯಾಗ್ರಹಣವಿದೆ.