ನಮ್ಮ ಕನ್ನಡ ಚಿತ್ರರಂಗದಲ್ಲಿ ಕನಸುಗಾರ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಎಂದರೆ ನಮನೆನಪಾಗುವುದು ಬಣ್ಣಬಣ್ಣದ ಸಿನಿಮಾಗಳು ವರ್ಣರಂಜಿತವಾದ ಫಿಲ್ಮ್ ಸೆಟ್ ಗಳು ಸೂಪರ್ ಡೂಪರ್ ಹಿಟ್ ಚಿತ್ರಗಳು ಮತ್ತು ಅದರಲ್ಲಿ ಬರುತ್ತಿದ್ದ ಸುಮಧರವಾದ ಸೂಪರ್ ಹಿಟ್ ಹಾಡುಗಳು. ಕನ್ನಡ ಚಿತ್ರರಂಗದಲ್ಲಿ ಕೋಟಿ ಕೋಟಿ ಲೆಕ್ಕದಲ್ಲಿ ಚಿತ್ರವನ್ನು ನಿರ್ಮಿಸುವ ಕನಸನ್ನು ಕಾಣುವಂತೆ ಮಾಡಿದ್ದೇ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಎಂದು ಹೇಳಿದರೆ ನಿಜಕ್ಕೂ ತಪ್ಪಾಗಲಾರದು.
ಚಿತ್ರರಂಗದಲ್ಲಿ ನಟನಾಗಿ ನಿರ್ಮಾಪಕನಾಗಿ ಹಾಗೂ ನಿರ್ದೇಶಕನಾಗಿಯೂ ಸಹ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದು ಅಲ್ಲದೇ ಚಿತ್ರರಂಗದಲ್ಲಿ ತಮ್ಮದೇ ಆದ ಘನತೆ ಗೌರವ ಹಾಗೂ ಸ್ಥಾನವನ್ನು ಕೂಡ ಪಡೆದುಕೊಂಡಿದ್ದಾರೆ.ನಮ್ಮ ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ರವರು ಸತತ ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿರುವ ನಟ. ಇಂದಿಗೂ ಕೂಡ ನಟ ರವಿಚಂದ್ರನ್ ಅವರ ಸಿನಿಮಾಗಳು ಪಡ್ಡೆ ಹುಡುಗರ ಫೇವರೇಟ್ ಎನ್ನಬಹುದು. ಹೌದು ತಮ್ಮ ಸಿನಿಮಾಗಳಲ್ಲಿ ನಟಿಯರನ್ನು ಅತಿ ಸುಂದರವಾಗಿ ತೋರಿಸುತ್ತಾರೆ ನಟ ರವಿಚಂದ್ರನ್ ರವರು.
ತಮ್ಮ ಕ್ರೇಜಿನೆಸ್ ಮೂಲಕವೇ ಕನ್ನಡ ಚಿತ್ರರಂಗವನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋದ ಕ್ರೇಜಿಸ್ಟಾರ್ ರವಿಚಂದ್ರನ್ ರವರನ್ನು ಪ್ರೀತಿಸುವಂತಹ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಹೌದು ಇನ್ನೂ ವಿಶೇಷ ಎಂದರೆ ಯಾವ ನಟರಿಗೂ ಕೂಡ ಇರದಂತಹ ಸಾಕಷ್ಟು ಮಹಿಳಾ ಅಭಿಮಾನಿಗಳನ್ನು ಹೊಂದಿರುವಂತಹ ಖ್ಯಾತ ನಟರುಲ್ಲ. ಹೀಗೆ 1987ರಲ್ಲಿ ಪ್ರೇಮಲೋಕ ಚಿತ್ರದಿಂದ ತಮ್ಮ ಸಿನಿಪಯಣವನ್ನು ಆರಂಭಿಸಿ ನಂತರ ರಣಧೀರ ಮಲ್ಲ ಕ್ರೇಜಿಸ್ಟಾರ್ ರಾಮಾಚಾರಿ ಸಿಪಾಯಿ ಶಾಂತಿಕ್ರಾಂತಿ ಪುಟ್ನಂಜ ಕನಸುಗಾರ ಯಾರೆ ನೀನು ಚೆಲುವೆ ಹೀಗೆ ಹತ್ತು ಹಲವಾರು ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದರು.
ಆದರೆ ಇದೀಗ ಅವರು ಮಾತಾಡಿದ ಕೆಲ ಮಾತುಗಳು ಕೆಲ ದಿನಗಳ ಹಿಂದೆ ವೈರಲ್ ಆಗಿದ್ದವು ಅದರಲ್ಲಿ ಅವರು ಸಾಲ ಮಾಡಿ ಸಿನಿಮಗೋಸ್ಕರ ಮಾನೆ ಮಾರಿರುವ ವಿಷಯ ಬಯಲಾಗಿದೆ. ಸದ್ಯ ಇದೆ ವಿಚಾರವಾಗಿ ಈಗ ಎಲ್ಲಾ ಕಡೆ ರವಿಚಂದ್ರನ್ ಸುದ್ದಿಯಾಗಿದ್ದಾರೆ. ಇದೀಗ ರವಿಚಂದ್ರನ್ ಗೆ ಸಹಾಯವಾಗಿ ಡಿಬಾಸ್ ಮನೆ ಕೊಟ್ಟಿದ್ದಾರೆ ಅನ್ನುವ ಸುದ್ದಿ ಎಲ್ಲೆಡೆ ಹರಡಿದೆ. ನಿಜಕ್ಕೂ ಇದು ನಿಜವಾಗಿದ್ದಲ್ಲಿ ಡಿಬಾಸ್ ಗೆ ನಾಮಗಳು.