ಏಷ್ಯಾ ಕಪ್ ಫೈನಲ್ ಸೋತ ಬಳಿಕ ಸಿಟ್ಟಿಗೆದ್ದ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಇಂಡಿಯಾ ಫ್ಯಾನ್ ಗೆ ಮಾಡಿದ್ದೇನು? ವಿಡಿಯೋ ವೈರಲ್
ಏಷ್ಯಾಕಪ್ ಫೈನಲ್ ಪಂದ್ಯ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ನಡೆದಿದ್ದು ಟಾಸ್ ಗೆದ್ದ ಪಾಕ್ ನಾಯಕ ಬಾಬರ್ ಅಜಮ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿದ್ದು ತಂಡಕ್ಕೆ ಹೆಚ್ಚಿನ ರನ್ಗಳು ಭಾನುಕಾ ರಾಜಪಕ್ಸೆ ಅವರ ಬ್ಯಾಟ್ನಿಂದ ಬಂದವು. ಅವರು 45 ಎಸೆತಗಳಲ್ಲಿ 71 ರನ್ ಗಳಿಸಿ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಇದರಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ಗಳಿದ್ದು ರಾಜಪಕ್ಸೆ 157 ಸ್ಟ್ರೈಕ್ ರೇಟ್ನೊಂದಿಗೆ ಬ್ಯಾಟ್ ಬೀಸಿ ಅಜೇಯರಾಗಿ ಉಳಿದರು.
ಇದೇ ವೇಳೆ ಹಸರಂಗ ಕೇವಲ 21 ಎಸೆತಗಳಲ್ಲಿ 36 ರನ್ ಗಳಿಸಿದ್ದು ಪಾಕಿಸ್ತಾನ ಪರ ಹ್ಯಾರಿಸ್ ರೌಫ್ ಗರಿಷ್ಠ 3 ವಿಕೆಟ್ ಪಡೆದರು. ಅದೇ ವೇಳೆ ಶಾದಾಬ್ ಖಾನ್ ನಸೀಮ್ ಶಾ ಮತ್ತು ಇಫ್ತಿಕರ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು. ನಸೀಮ್ ಶಾ ಶ್ರೀಲಂಕಾಕ್ಕೆ ಮೊದಲ ಹೊಡೆತದ ರುಚಿ ನೋಡಿದ್ದು ಮೊದಲ ಓವರ್ನಲ್ಲೇ ಮೆಂಡಿಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಮೆಂಡಿಸ್ಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಬಳಿಕ ಹಾರಿಸ್ ರೌಫ್ ಎರಡನೇ ವಿಕೆಟ್ ಪಡೆದಿದ್ದು ಪಾಥುಮ್ ನಿಸ್ಸಾಂಕ 8 ರನ್ ಗಳಿಸಿ ಬಾಬರ್ ಅಜಮ್ಗೆ ಕ್ಯಾಚ್ ನೀಡಿದರು. ಮೂರನೇ ವಿಕೆಟ್ ಪಡೆದ ರೌಫ್ 1 ರನ್ ಗಳಿಸಿದ್ದ ದನುಷ್ಕಾ ಗುಣತಿಲಿಕಾ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.
ಇನ್ನು ರನ್ ಚೇಸ್ ವೇಳೆ ಪಾಕಿಸ್ತಾನ ತಂಡಕ್ಕೆ ಮೊದಲ ಓವರ್ನಲ್ಲಿ ಹೆಚ್ಚುವರಿ ರನ್ಗಳಿಂದಲೇ ಉತ್ತಮ ಆರಂಭ ಸಿಕ್ಕಿದ್ದು ದಿಲ್ಷಾನ್ ಮಧುಶಂಕ ಮೊದಲ ಓವರ್ನಲ್ಲೇ ವೈಡ್ ಮೂಲಕ 8 ರನ್ ಬಿಟ್ಟುಕೊಟ್ಟಿದ್ದರು. ಆದರೆ ಅದನ್ನು ಅಲ್ಲಿಗೇ ಬಿಟ್ಟು ಸಂಘಟಿತ ಬೌಲಿಂಗ್ ಪ್ರದರ್ಶನ ನೀಡಿದ ಶ್ರೀಲಂಕಾ ಸತತ ವಿಕೆಟ್ಗಳನ್ನು ಕಿತ್ತು ಪಾಕ್ ಮೇಲೆ ಒತ್ತಡ ಹೇರಿತು. ಯುವ ವೇಗದ ಬೌಲರ್ ಪ್ರಮೋದ್ ಮಧುಶಾನ್ ತಮ್ಮ 4 ಓವರ್ಗಳಲ್ಲಿ 34 ರನ್ಗಳನ್ನು ಕೊಟ್ಟು 4 ವಿಕೆಟ್ಗಳನ್ನು ಪಡೆದರು. ಇನಿಂಗ್ಸ್ ಮಧ್ಯದಲ್ಲಿ ಪಾಕ್ ಬ್ಯಾಟರ್ಗಳಿಗೆ ಕಬ್ಬಿಣದ ಕಡಲೆಯಾದ ಸ್ಟಾರ್ ಲೆಗ್ ಸ್ಪಿನ್ನರ್ ವಾನಿಂದು ಹಸರಂಗ (27ಕ್ಕೆ 3) ಪ್ರಮುಖ ವಿಕೆಟ್ಗಳನ್ನು ಉರುಳಿಸಿದರು. ಸ್ಲಾಗ್ ಓವರ್ಗಳಲ್ಲಿ ಮಂದಗತಿಯ ಬೌನ್ಸರ್ಗಳ ಮೂಲಕ ಪಾಕ್ ಬ್ಯಾಟರ್ಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ ಚಮಿಕ ಕರುಣಾರತ್ನೆಗೂ ಎರಡು ವಿಕೆಟ್ ಲಭ್ಯವಾದವು. ಅಂತಿಮವಾಗಿ ಇನಿಂಗ್ಸ್ನ ಕೊನೆಯ ಎಸೆತದಲ್ಲಿ 147 ರನ್ಗಳಿಗೆ ಆಲೌಟ್ ಆಗಿ ಫೈನಲ್ನಲ್ಲಿ 23 ರನ್ಗಳಿಂದ ಸೋತಿತು. ಮೂರು ದಿನಗಳ ಅಂತರದಲ್ಲಿ ಶ್ರೀಲಂಕಾ ವಿರುದ್ಧ ಇದು ಎರಡನೇ ಸೋಲಾಗಿದೆ.
ಇನ್ನು ಪಾಕಿಸ್ತಾನದ ಸೋಲಿನ ನಂತರ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಕ್ರೀಡಾಂಗಣದ ಹೊರಗೆ ಕೆಲವು ವರದಿಗಾರರೊಂದಿಗೆ ಮಾತನಾಡಿದರು ಮತ್ತು ಭಾರತೀಯ ವರದಿಗಾರರಲ್ಲಿ ಒಬ್ಬರಾದ ರೋಹಿತ್ ಜುಗ್ಲಾನ್ ಅವರು ಸೋಲಿನಿಂದ ಸಾಕಷ್ಟು ಅತೃಪ್ತರಾಗಿರುವ ಪಾಕಿಸ್ತಾನಿ ಸಾರ್ವಜನಿಕರಿಗೆ ನೀವು ಸಂದೇಶವನ್ನು ಹೊಂದಿದ್ದೀರಾ ಎಂದು ಕೇಳಿದ್ದು ಸ್ಪಷ್ಟ ಕಾರಣಗಳಿಗಾಗಿ ಬಹುಶಃ ಅಂತಹ ಉತ್ತಮ ಮನಸ್ಥಿತಿಯಲ್ಲಿಲ್ಲದ ರಮಿಜ್ ನೀವು ಭಾರತದವರಾಗಿರಬೇಕು ಮತ್ತು ಈಗ ಪಾಕಿಸ್ತಾನ ಸೋತಿರುವುದರಿಂದ ತುಂಬಾ ಸಂತೋಷವಾಗಿರುವಿರಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು . ಅವರು ಸ್ವಲ್ಪ ಹೆಚ್ಚು ವಾದಿಸಿದರು ಮತ್ತು ನಂತರ ವರದಿಗಾರನ ಫೋನ್ ಅನ್ನು ಅವನಿಗೆ ಹಿಂತಿರುಗಿ ಕೊಟ್ಟು ಹೊರಟುಹೋದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
How can you try to snatch the phone of our reporter? Why can’t you accept the fact that Pakistanis are extremely disappointed with your leadership. Peak frustration Ramiz Raja @iramizraja 👎#SportsYaari #Pak @rohitjuglan pic.twitter.com/BCQzXZonhV
— Sushant Mehta (@SushantNMehta) September 11, 2022