ಕನ್ನಡ ಕಿರುತೆರೆ ಲೋಕದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಪ್ರೇಕ್ಷಕ ವರ್ಗದ ಮನಸ್ಸನ್ನು ಗೆದ್ದುಕೊಂಡಿದೆ. ಅದರಲ್ಲಿಯು ಆರ್ಯವರ್ಧನ್ ಪಾತ್ರವನ್ನು ಎಲ್ಲರೂ ಕೂಡ ಇಷ್ಟ ಪಟ್ಟಿದ್ದರು. ಆದರೆ ಕೆಲ ದಿನಗಳ ಹಿಂದೆಯೇ, ಅನಿರುದ್ಧ್ ಅವರಿಗೆ ಜೊತೆ ಜೊತೆಯಲಿ ಧಾರಾವಾಹಿಯಿಂದ ನಡೆದಿದ್ದರು. ಹೌದು, ಚಿತ್ರೀಕರಣದ ವೇಳೆ ಸ್ಕ್ರಿಪ್ಟ್ ಬದಲಿಸಲು ಹೇಳಿದ ಅನಿರುದ್ಧ್ ಅವರ ಮಾತಿಗೆ ಧಾರಾವಾಹಿ ತಂಡ ಒಪ್ಪಿಗೆ ಸೂಚಿಸಿಲ್ಲ.. ಆಗ ಇದ್ದಕಿದ್ದ ಹಾಗೆ ಚಿತ್ರೀಕರಣದಿಂದ ಅನಿರುದ್ಧ್ ಹೊರ ಹೋಗಿದ್ದರು. ಈ ಹಿಂದೆಯೂ ಅನಿರುದ್ಧ್ ಹೀಗೆ ಮಾಡಿದ್ದು ಕಳೆದ ಒಂದು ವರ್ಷದಿಂದಲೂ ಇಬ್ಬರ ನಡುವೆ ವೈಮನಸ್ಸು ನಡೆದಿದೆ ಎನ್ನಲಾಗಿತ್ತು. ಈ ಎಲ್ಲಾ ಕಾರಣದಿಂದ ಅನಿರುದ್ಧ್ ನಡವಳಿಕೆಯಿಂದ ಬೇಸತ್ತು ಧಾರಾವಾಹಿ ತಂಡ ಅನಿರುದ್ಧ್ ಅವರನ್ನು ಕೈ ಬಿಡುವ ನಿರ್ಧಾರ ಮಾಡಿದೆ ಎನ್ನಲಾಗಿತ್ತು.
ಅನಿರುದ್ಧ್ ಈ ಧಾರಾವಾಹಿಯಿಂದ ಹೊರ ನಡೆದ ಬಳಿಕ, ಆರೂರು ಜಗದೀಶ್ ಅವರು ಕಿರುತೆರೆ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದರು. ಅಲ್ಲಿ ಚರ್ಚೆ ನಡೆಸಿ ಅನಿರುದ್ಧ್ ಅವರನ್ನು ಜೊತೆಜೊತೆಯಲಿ ಮಾತ್ರವಲ್ಲ ಎರಡು ವರ್ಷಗಳ ಕಾಲ ಸಂಪೂರ್ಣ ಕಿರುತೆರೆಯಿಂದಲೇ ಅನಿರುದ್ಧ್ ಅವರನ್ನು ಹೊರಗೆ ಹಾಕಲಾಗಿದೆ ಎನ್ನಲಾಗಿತ್ತು. ಹೌದು, ಯಾವುದೇ ಧಾರಾವಾಹಿ ಯಾವುದೇ ಶೋ ದಲ್ಲಿ ಪಾಲ್ಗೊಳ್ಳುವಂತಿಲ್ಲ. ಅದರ ಜೊತೆಗೆ ಅನಿರುದ್ಧ್ ಅವರು ಈ ಧಾರಾವಾಹಿಯಿಂದ ಹೊರ ನಡೆದರೂ ಕೂಡ ಚಿತ್ರೀಕರಣ ಮಾತ್ರ ನಿಂತಿರಲಿಲ್ಲ. ಆದರೆ ಇದೀಗ ಜೊತೆ ಜೊತೆಯಲಿ ತಂಡಕ್ಕೆ ಶಾಕ್ ಕೊಟ್ಟಿದ್ದಾರೆ ಅನಿರುದ್ಧ್.
ಅಷ್ಟೇ ಅಲ್ಲದೇ, ಅನಿರುದ್ಧ್ ಅವರನ್ನು ಯಾವುದೇ ವಾಹಿನಿ ಹಾಗೂ ಧಾರಾವಾಹಿಗಳು ತೆಗೆದುಕೊಳ್ಳಬಾರದು ಎಂದು ನಿರ್ಮಾಪಕರು ತಿಳಿಸಿದ್ದರು. ಆದರೆ ಈ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದ ಅನಿರುದ್ಧ್ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆಯಲ್ಲಿ ನಟ ಅನಿರುದ್ಧ್ ಮಾಧ್ಯಮದವರ ಜೊತೆಗೆ ಮಾತನಾಡಿ, ‘ನಮ್ಮ ಮೇಲೆ ಬಂದಿರುವ ಎಲ್ಲ ಆರೋಪಗಳು ಸುಳ್ಳು ಎಂದಿದ್ದಾರೆ. ಹೌದು, ನಟ ಅನಿರುದ್ಧ್ , “ನನ್ನ ವಿರುದ್ಧ ಇಷ್ಟೆಲ್ಲಾ ಆರೋಪಗಳನ್ನ ಮಾಡುತ್ತಾರಲ್ಲ. ಅವರು ತಮ್ಮ ಮಕ್ಕಳ ತಲೆ ಮೇಲೆ ಕೈ ಇಟ್ಟು ಹೇಳಲಿ. ನಾನು ನನ್ನ ಮಕ್ಕಳ ತಲೆ ಮೇಲೆ ಕೈ ಇಟ್ಟು ಹೇಳುತ್ತೇನೆ. ನಾನು ಹೋರಾಡಿದ್ದು ನನ್ನ ಪಾತ್ರಕ್ಕಾಗಿ ಮಾತ್ರ. ಧಾರಾವಾಹಿ ಆರಂಭಕ್ಕೂ ಮೊದಲೇ ನಾನು ಹೇಳಿದ್ದೇನೆ.
ಹಿಂದಿನ ದಿನವೇ ನನಗೆ ಸ್ಕ್ರಿಪ್ಟ್ ಕಳಿಸಿ ಎಂದು ಹೇಳಿದ್ದೇನೆ. ಅಲ್ಲಿ ನಮ್ಮ ಉದ್ದೇಶ ಧಾರಾವಾಹಿ ಗೆಲ್ಲಬೇಕಿರೋದು. ಕಳೆದ ಒಂದು ವರ್ಷದಿಂದ ಒತ್ತಡದಲ್ಲಿ ಕೆಲಸ ಮಾಡಿದ್ದೇನೆ. ನಮ್ಮ ಕಲಾವಿದರೂ ಅತ್ತುಕೊಂಡು ಕೆಲಸ ಮಾಡಿದ್ದಾರೆ. ನನ್ನಿಂದ ಎಷ್ಟೋ ಸೀನ್ಗಳು ಅದ್ಭುತವಾಗಿ ಮೂಡಿಬಂದಿವೆ. ಬಂದಿಲ್ಲ ಎಂದು ಅವರ ಮಕ್ಕಳ ಮೇಲೆ ಅಣೆ ಮಾಡಲಿ. ಅವ್ರು ಹೇಳಿದ ಸಮಯಕ್ಕೆ ಬಂದಿದ್ದೇನೆ, ಹೋಗಿದ್ದೇನೆ. ಜೆಎಸ್ ಪ್ರೊಡಕ್ಷನ್ನಿಂದ ಒಂದು ಹನಿ ಕುಡಿದಿಲ್ಲ. 3 ವರ್ಷದಿಂದ ಪ್ರೊಡಕ್ಷನ್ನಿಂದ ಹನಿ ನೀರು ಕುಡಿದಿಲ್ಲ. ಇದು ದುರಂತ. ನಾನು ಯಾವುದೇ ರೀತಿಯ ಡಿಮ್ಯಾಂಡ್ ಮಾಡುತ್ತಿರಲಿಲ್ಲ. ಹೊರಗಡೆ ಹೋದಾಗ ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ನನಗೆ ಸುಳ್ಳು ಹೇಳುವ ಅಗತ್ಯ ಇಲ್ಲ. ಇನ್ನು ಸೆಟ್ನಲ್ಲಿ ನಾನು ಯಾರಿಗೂ ಬೈದಿಲ್ಲ. ಸೆಟ್ನಲ್ಲಿ ಮೂರ್ಖರಂತೆ ಕೆಸಲ ಮಾಡಬಾರದು ಎಂದಿದ್ದೆ ಅಷ್ಟೇ, ಎಂದಿದ್ದರು ನಟ ಅನಿರುದ್ಧ್. ಆದರೆ ಇದೀಗ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ ನಟ ಅನಿರುದ್ಧ್.
ಕಿರುತೆರೆಯಲ್ಲಿ ಕಾಣಿಸಿಕೊಳ್ಳದಿದ್ದರೇನು, ಮನೋರಂಜನಾ ಮಾಧ್ಯಮಗಳು ಕೈ ಬಿಟ್ಟರೇನು, ಸುದ್ದಿ ಮಾಧ್ಯಮಗಳು ಇವೆ ಎನ್ನುವ ಹಾಗೆ ಸುದ್ದಿ ಮಾಧ್ಯಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸುದ್ದಿ ಮಾಧ್ಯಮದಲ್ಲಿ ಇವರೇನು ಮಾಡುತ್ತಾರೆ ಅಂದುಕೊಂಡರೆ, ಅವರು ಕಾಣಿಸಿಕೊಂಡಿರುವುದು ವರದಿಗಾರನಾಗಿ. ನ್ಯೂಸ್ 18 ಸುದ್ದಿ ವಾಹಿನಿಯ ಕಾರ್ಯಕ್ರಮವೊಂದಕ್ಕೆ ವರದಿಗಾರನಾಗಿ ಕೆಲಸ ಮಾಡಿದ್ದಾರೆ. ಈ ಕುರಿತಾದ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣಸಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಆಗುತ್ತಿರುವ ಮಹಾಮಳೆಯ ಕುರಿತು ರಸ್ತೆಗೆ ಇಳಿದು ನೀರಿನ ನಡುವೆ ನಿಂತು ಅನಿರುದ್ಧ್ ಅವರು ವರದಿ ಮಾಡಿದ್ದಾರೆ. ಮಹಾಮಳೆಗೆ ಮಹಾರಿಪೋರ್ಟರ್ ಎಂಬ ಕಾರ್ಯಕ್ರಮ ಪ್ರಸಾರವಾಗಿದೆ. ವರದಿಗಾರನಾಗಿ ಕಾಣಿಸಿಕೊಂಡಿರುವುದು ಜೊತೆ ಜೊತೆಯಲಿ ತಂಡಕ್ಕೆ ಸವಾಲು ನೀಡಿದ್ದಂತೆ ಇದೆ ಅನಿರುದ್ಧ್ ಅವರ ನಡೆ. ಸದ್ಯಕ್ಕೆ ಇವರನ್ನು ವರದಿಗಾರನಾಗಿ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.