ಸದ್ಯ ಇತ್ತೀಚೆಗಷ್ಟೇ ತೆರೆಕಂಡ Adipurush ಸಿನಿಮಾದ ಟೀಸರ್ನಲ್ಲಿ ರಾಮ ಹಾಗೂ ಲಕ್ಷ್ಮಣ ಮತ್ತು ರಾವಣರ ಚಿತ್ರಣವು ಹಿಂದೂ ಸಮಾಜವನ್ನು ಅಪಹಾಸ್ಯ ಮಾಡಿದೆ ಎಂಬ ಆಕ್ಷೇಪ ವ್ಯಕ್ತಪಡಿಸಿರುವಂತಹ ವಿಶ್ವ ಹಿಂದೂ ಪರಿಷತ್ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಇದೀಗ ಎಚ್ಚರಿಕೆ ನೀಡಿದೆ. ಹೌದು ವಿಶ್ವ ಹಿಂದೂ ಪರಿಷತ್ ಸಂಭಾಲ್ ಘಟಕದ ಪ್ರಚಾರ ಪ್ರಮುಖ್ ಅಜಯ್ ಶರ್ಮಾ ರವರು ಸುದ್ದಿಗಾರರೊಂದಿಗೆ ಮಾತನಾಡಿದ್ದು ಆದಿಪುರುಷ ಸಿನಿಮಾದಲ್ಲಿ ಭಗವಾನ್ ರಾಮ ರಾವಣ ಮತ್ತು ಲಕ್ಷ್ಮಣರನ್ನು ಚಿತ್ರಿಸಿದ ರೀತಿ ಹಿಂದೂ ಧರ್ಮವನ್ನೇ ಅಣಕಿಸುವಂತಿದ್ದು ಈ ಮೂಲಕ ಹಿಂದೂ ಸಮಾಜದ ಮೌಲ್ಯಗಳನ್ನು ಅಪಹಾಸ್ಯ ಮಾಡಲಾಗಿದೆ. ಇದನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಎಂದಿದ್ದಾರೆ.
ಹೌದು ಆದಿಪುರುಷ ಚಿತ್ರದಲ್ಲಿ ಭಗವಾನ್ ರಾಮನಾಗಿ ತೆಲುಗು ನಟ ಪ್ರಭಾಸ್ ಹಾಗೂ ಸೈಫ್ ಅಲಿ ಖಾನ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷ ಜನರವರಿಯಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಇದೀಗ ನಿರ್ಧರಿಸಿದೆ.ರಾವಣನನ್ನು ಚಿತ್ರಿಸಿರುವ ರೀತಿ ರಾಮಾಯಣ ಹಾಗೂ ಸಂಬಂಧಿತ ಧಾರ್ಮಿಕ ಗ್ರಂಥಗಳಿಗೆ ಹೊಂದಿಕೆಯಾಗುವುದಿಲ್ಲ. ಈ ಕಾರಣದಿಂದಾಗಿ ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ವಿಎಚ್ಪಿ ಅವಕಾಶ ನೀಡುವುದಿಲ್ಲ ಎಂದು ಶರ್ಮಾ ರವರು ಹೇಳಿದ್ದು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವಿಎಚ್ಪಿ ನಾಯಕ ಮಂಡಳಿಯು ಮನಬಂದಂತೆ ಹಾಗೂ ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿದೆ.
ಇನ್ನು ಮಂಡಳಿಯು ತನ್ನ ಕರ್ತವ್ಯವನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ ಸರ್ಕಾರ ಅದನ್ನು ವಿಸರ್ಜಿಸಬೇಕು ಎಂದು ಹೇಳಿದ್ದಾರೆ. ಸದ್ಯ ಇದರ ಜೊತೆಗೆ ಬಾಯ್ಕಾಟ್ ಆಧಿಪುರುಷ್ ಅಭಿಯಾನ ಕೂಡ ಪ್ರಾರಂಭವಾಗಿದೆ. ಹೌದು ಲಾಲ್ ಸಿಂಗ್ ಚಡ್ಡಾ ಮತ್ತು ಬ್ರಹ್ಮಾಸ್ತ್ರ ಸಿನಿಮಾದ ಬಾಯ್ಕಾಟ್ ನಂತರ ಮತ್ತೊಂದು ಬಾಲಿವುಡ್ ಚಿತ್ರ ಆದಿಪುರುಷ್ ಟೀಸರ್ ಇದೀಗ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ನಲ್ಲಿದೆ. ಹೌದು ಬಾಲಿವುಡ್ ನಟ ಸೈಫ್ ಅಲಿ ಖಾನ್ ಪ್ರಭಾಸ್ ಮತ್ತು ಕೃತಿ ಸನೋನ್ ಅಭಿನಯಿಸಿರುವ ಓಂ ರಾವತ್ ಅವರ ಆದಿಪುರುಷ್ ಸಿನಿಮಾದ ಉತ್ಸಾಹವು ಸಾಕಷ್ಟು ಹೆಚ್ಚಾಗಿದ್ದು ಆದಾಗ್ಯೂ ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳ ಬಳಿಕ ನೆಟ್ಟಿಗರು ಸೈಫ್ ರವರ ಇಸ್ಲಾಮಿಕ್ ನೋಟಕ್ಕಾಗಿ ಸಿನಿಮಾವನ್ನು ಟೀಕಿಸಲು ಪ್ರಾರಂಭಿಸಿದ್ದಾರೆ.

ವಿಎಫ್ಎಕ್ಸ್ ಅನ್ನು ನಂಬಲಿಲ್ಲ ಹಾಗೂ ಇತರ ತಾರಾಗಣದ ವೇಷಭೂಷಣಗಳನ್ನು ಸಹ ಗುರಿಯಾಗಿಸಲಾಯಿತು.
ರಮಾನಂದ ಸಾಗರ್ ರವರ ರಾಮಾಯಣ ಧಾರಾವಾಹಿಯಿಂದ ಆದಿಪುರುಷ್ ಗೆ ಭಗವಾನ್ ಹನುಮಂತನೊಂದಿಗೆ ಹೋಲಿಕೆ ಮಾಡಲಾಗುತ್ತಿದ್ದು ನಟ ದೇವದತ್ತ ಗಜಾನನ ಈ ಚಿತ್ರದಲ್ಲಿ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ಹನುಮಂತನ ನೋಟವು ಇಸ್ಲಾಮಿಕ್ ಉಡುಗೆಯೊಂದಿಗೆ ಹೋಲಿಕೆಗಳನ್ನು ಹೊಂದಿದೆ ಎಂದು ನೆಟ್ಟಿಗರು ಇದೀಗ ಹೇಳಿದ್ದಾರೆ.
ಬಾಲಿವುಡ್ ಹನುಮಂತ ಮುಸಲ್ಮಾನನಂತೆ ಕಾಣುತ್ತಿದ್ದು ಬಾಯ್ಕಾಟ್ ಆದಿಪುರುಷ್ ಎಂದು ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ. 35 ವರ್ಷಗಳ ಬಳಿಕ ಬಾಲಿವುಡ್ ರಾವಣ ಹಾಗೂ ಹನುಮಾನ್ ಜೀ ಅವರ ಸೌಂದರ್ಯ ವನ್ನು ಮೊಘಲರನ್ನಾಗಿ ಪರಿವರ್ತಿಸಿತು ಎಂದು ಇನ್ನೊಬ್ಬರು ಬರೆದಿದ್ದಾರೆ. ಇನ್ನು ಇದಕ್ಕೂ ಮೊದಲು ಮಂಗಳವಾರ ಮಧ್ಯಪ್ರದೇಶದವರಾದ ಗೃಹ ಸಚಿವ ನರೋತ್ತಮ್ ಮಿಶ್ರಾ ರವರು ಚಿತ್ರದಲ್ಲಿ ದೇವರುಗಳ ಚಿತ್ರಣದ ಬಗ್ಗೆ ತಮ್ಮ ನೋವನ್ನು ಕೂಡ ವ್ಯಕ್ತಪಡಿಸಿದ್ದಾರೆ.