ಕಲರ್ಸ್ ವಾಹಿನಿಯ ಕನ್ನಡತಿ ಧಾರಾವಾಹಿ ಭಾರಿ ಸಂಚಲನ ಮೂಡಿಸುತ್ತಿದ್ದು ಕನ್ನಡ ಕಿರುತೆರೆಯಲ್ಲಿ ಸಾಮಾನ್ಯದಂತಿದ್ದರೂ ಕೂಡ ಒಂದು ರೀತಿ ವಿಭಿನ್ನವಾದ ರೀತಿಯಲ್ಲಿ ತೆರೆ ಮೇಲೆ ಬರುತ್ತಿದ್ದು ಜನರ ಮನಸ್ಸಿಗೆ ಹತ್ತಿರವಾದ ಧಾರಾವಾಹಿ ಎಂದರೆ ಖಂಡಿತ ತಪ್ಪಾಗಲಾರದು.
ಹೌದು ಅದರಲ್ಲೂ ಕನ್ನಡದ ಬಗ್ಗೆಗಿನ ಅಭಿಮಾನ ಮತ್ತು ಕನ್ನಡವನ್ನು ಹೆಮ್ಮೆಯಾಗಿ ಧಾರಾವಾಹಿಯಲ್ಲಿ ತೋರುವ ರೀತಿ ನಿಜಕ್ಕೂ ಕನ್ನಡಾಭಿಮಾನಿಗಳಿಗೆ ಮನಸ್ಸಿಗೆ ಒಂದು ರೀತಿ ಮುದವೆನಿಸಲಿದ್ದು ಅದರಲ್ಲಿಯೂ ಕೂಡ ಪ್ರೆಮ ನಿವೇದನೆಯ ಕೆಲ ಸನ್ನಿವೇಶಗಳಲ್ಲಿ ಕನ್ನಡ ಭಾಷೆಯನ್ನು ಬಳಸುವ ಪರಿ ನಿಜಕ್ಕೂ ಎಷ್ಟು ಸೊಗಸು ಎನಿಸುತ್ತದೆ ಎನ್ನಬಹುದು.ಧಾರಾವಾಹಿ ತೆರೆ ಮೇಲೆ ಎಷ್ಟು ಸದ್ದು ಮಾಡಿತೋ ಅಷ್ಟೇ ಧಾರಾವಾಹಿಯ ಕಲಾವಿದರ ವಿಚಾರಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ.
ಇನ್ನು ಕನ್ನಡತಿ ಧಾರಾವಾಹಿಯ ಎಲ್ಲಾ ಕಲಾವಿದರಿಗೂ ಕೂಡ ಕನ್ನಡತಿ ದೊಡ್ಡ ಮಟ್ಟದಲ್ಲಿ ಯಶಸ್ಸು ಹೆಸರು ಹಣ ಎಲ್ಲವನ್ನೂ ಸಹ ತಂದುಕೊಟ್ಟಿದ್ದು ಧಾರಾವಾಹಿಯ ಮೂಲಕವೇ ಕಲಾವಿದರನ್ನು ಗುರುತಿಸುತ್ತಿರುವುದೂ ಹೆಮ್ಮೆಯ ವಿಚಾರವಾಗುದ್ದು ಇನ್ನು ಈ ಧಾರಾವಾಹಿಯ ಮೂಲಕ ನಟ ಹರ್ಷ ಹಾಗೂ ಭುವಿ ಪಾತ್ರಧಾರಿಗಳಾದ ನಟ ಕಿರಣ್ ರಾಜ್ ಹಾಗೂ ರಂಜನಿ ರಾಘವನ್ ಅವರು ಮನೆಮಾತಾಗಿದ್ದು ಅದರಲ್ಲೂ ಕೂಡ ತೆರೆ ಮೇಲೆ ಬಹಳ ಪ್ರಬುದ್ಧತೆ ಇರುವ ಪಾತ್ರ ಮಾಡುತ್ತಿರುವ ಈ ಜೋಡಿಗೆ ಜನರು ಫಿದಾ ಎಂದರೂ ತಪ್ಪಾಗಲಾರದು.
ಹೌದು ಎಂದಿನಂತೆ ತೆರೆ ಮೇಲಿನ ಜೋಡಿ ನಿಜ ಜೀವನದಲ್ಲಿಯೂ ಕೂಡ ಒಂದಾಗಲಿ ಎಂದು ಅಭಿಮಾನಿಗಳು ಕೇಳಿಕೊಳ್ಳುವುದು ಹೊಸ ವಿಚಾರವೇನೂ ಅಲ್ಲ.ಇನ್ನು ತಮಗೆ ಇಷ್ಟವಾದ ಜೋಡಿಗಳು ನಿಜ ಜೀವನದಲ್ಲಿಯೂ ಕೂಡ ಒಂದಾಗಲಿ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದು ಅದೇ ರೀತಿಯಾಗಿ ಕಿರುತೆರೆ ಮತ್ತು ಬೆಳ್ಳಿತೆರೆಯ ಅದೆಷ್ಟೋ ಕಲಾವಿದರು ತಮ್ಮ ತಮ್ಮ ಸಹ ಕಲಾವಿದರುಗಳನ್ನು ಮದುವೆ ಆಗಿರೋದು ಉಂಟು.
ಇನ್ನು ಆದರೆ ಕನ್ನಡತಿ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆಯೇ ಹೋಗಿದ್ದು ಕನ್ನಡತಿ ಧಾರಾವಾಹಿಯ ಅಭಿಮಾನಿಗಳು ಕೂಡ ಹರ್ಷ ಹಾಗೂ ಭುವಿ ನಿಜ ಜೀವನದಲ್ಲಿಯೂ ಒಂದಾಗಲಿ ಎಂದು ಕೇಳಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿಯೂ ಇಬ್ಬರ ನಡುವೆ ಪ್ರೀತಿ ಇದೆ ಒಂದಾಗ್ತಾರೆ ಇಬ್ಬರೂ ಮದುವೆ ಆಗುತ್ತಾರೆ ಹೀಗೆ ಸಾಕಷ್ಟು ಸುದ್ದಿ ಹರಿದಾಡುತ್ತಿದೆ.
ಆದರೆ ಇದೆಲ್ಲವೂ ಕೂಡ ಸುಳ್ಳು ಪಾತ್ರವನ್ನು ಪಾತ್ರವನ್ನಾಗಿ ಮಾತ್ರ ನೋಡಿ ಎಂದು ಹರ್ಷ ಮತ್ತು ಭುವಿ ಇಬ್ಬರೂ ಸಹ ಕೇಳಿಕೊಂಡಿದ್ದು ಆದರೆ ಕೆಲ ದಿನಗಳ ಹಿಂದೆ ನಡೆದ ವಿಚಾರವೇ ಬೇರೆಯಾಗಿತ್ತು. ಹರ್ಷ ಹಾಗೂ ಭುವಿ ಓಡಿ ಹೋಗಿ ಧರ್ಮಸ್ಥಳದಲ್ಲಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಇದು ನಿಜಕ್ಕೂ ಸತ್ಯವಾ ಎನ್ನುವಷ್ಟರ ಮಟ್ಟಕ್ಕೆ ಯೂಟ್ಯೂಬ್ ನಲ್ಲಿ ಸುದ್ದಿಯಾಯಿತು. ಈ ವಿಚಾರ ಹರ್ಷ ಹಾಗೂ ಭುವಿಯ ಕಿವಿಗೂ ಕೂಡ ಬಿದ್ದಿದ್ದು ಇನ್ನು ಕೊನೆಗೆ ಮಾಧ್ಯಮದ ಮುಂದೆ ಬಂದ ಹರ್ಷ ಹಾಗೂ ಭುವಿ ಈ ಬಗ್ಗೆ ಸತ್ಯ ತಿಳಿಸಿದ್ದಾರೆ.
ಕನ್ನಡತಿ ಧಾರಾವಾಹಿಯಲ್ಲಿ ಹರ್ಷ ಹಾಗೂ ಭುವಿಯ ಮದುವೆ ಸಂಚಿಕೆಗಳು ನಡೆದಿದ್ದು ಭುವನೇಶ್ವರಿಯ ದೇವಾಲಯದಲ್ಲಿ ಕನ್ನಡದ ಮದುವೆ ಎನ್ನುವ ಕಾನ್ಸೆಪ್ಟ್ ನಲ್ಲಿ ಧಾರಾವಾಹಿಯ ಹೆಸರಿಗೆ ತಕ್ಕಂತೆ ಕನ್ನಡತಿಯ ಮದುವೆ ಕನ್ನಡದಲ್ಲಿ ಅದ್ಧೂರಿಯಾಗಿ ನೆರವೇರುತ್ತು ಎನ್ನಬಹುದು. ಹೌದು ಈ ಮದುವೆ ಸಂಚಿಕೆಗಳ ಚಿತ್ರೀಕರಣದಲ್ಲಿ ತೊಡಗಿದ್ದ ಸಮಯದಲ್ಲಿ ಮಾದ್ಯಮದ ಜೊತೆ ಮಾತನಾಡಿರುವ ಹರ್ಷ ಹಾಗೂ ಭುವಿ ತಮ್ಮ ಧರ್ಮಸ್ಥಳದ ಮದುವೆ ಬಗ್ಗೆ ಮಾತನಾಡಿದ್ದಾರೆ.
ಒಂದು ಧಾರಾವಾಹಿ ಎಂದ ಮೇಲೆ ಅದರ ಬಗ್ಗೆ ಕೆಲ ಸುದ್ದಿಗಳು ಹರಿದಾಡೋದು ಸಹಜವಾಗಿದ್ದು ಆದರೆ ನಮ್ಮಿಬ್ಬರ ವಿಚಾರದಲ್ಲಿ ಸ್ವಲ್ಪ ಜಾಸ್ತಿಯೇ ಆಗಿದೆ ಎನ್ನಬಹುದು. ನಮ್ಮಿಬ್ಬರಿಗೂ ಸಾಕಷ್ಟು ಬಾರಿ ಯೂಟ್ಯೂಬ್ ನಲ್ಲಿ ಮದುವೆ ಮಾಡಿಸಿದ್ದು ಅದೆಲ್ಲಕ್ಕೂ ಮೀರಿ ಕೆಲ ದಿನಗಳ ಹಿಂದೆ ಧರ್ಮಸ್ಥಳಕ್ಕೆ ಓಡಿ ಹೋಗಿ ನಾವಿಬ್ಬರು ಮದುವೆಯಾಗಿದ್ದೇವೆ ಎಂದು ಸುದ್ದಿಯಾಗಿತ್ತು
. ಹೌದು ಸ್ನೇಹಿತರೆಲ್ಲಾ ಕೇಳುವ ಹಂತಕ್ಕೆ ಬಂದು ನಿಂತಿದ್ದು ನಿಜಕ್ಕೂ ಅದೊಂದು ಮಾತ್ರ ಅತಿಯಾಗಿತ್ತು ಎನಿಸಿತು. ನಮಗೆ ಆ ವಿಚಾರ ತಿಳಿದಾಗ ಇಬ್ಬರೂ ಕೂಡ ಈ ಬಗ್ಗೆ ಮಾತನಾಡಿದ್ದು ನಿಜಕ್ಕೂ ಈ ರೀತಿ ಎಲ್ಲಾ ಯಾವುದನ್ನೇ ಆಗಲಿ ಅತಿಯಾಗಿ ಮಾಡಬಾರದು ಎಂದರು. ಅತ್ತ ರಂಜನಿ ಸಹ ಈ ಬಗ್ಗೆ ಮಾತನಾಡಿ ನಾವಿಬ್ಬರು ಇಂತಹ ವಿಚಾರಗಳನ್ನು ನೋಡಿದಾಗ ನಕ್ಕು ಸುಮ್ಮನಾಗ್ಗಿದ್ದು ಅದರ ಬಗ್ಗೆ ಹೆಚ್ಚು ಯೋಚಿಸಿದರೆ ಪ್ರಯೋಜನವಿಲ್ಲ. ನಮ್ಮ ನಮ್ಮ ಕೆಲಸದ ಕಡೆ ಗಮನ ನೀಡುತ್ತೇವೆ ಅಷ್ಟೇ ಎಂದಿದ್ದಾರೆ.